ನಗರದ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಿ.ಟಿ.ಎಸ್. ತಂತ್ರಜ್ಞಾನವನ್ನು ’ಯೋಗರಾಜ..........ಭಟ್’ ಚಿತ್ರಕ್ಕೆ ನಿರ್ದೇಶಕ ಹಾಗೂ ನಿರ್ಮಾಪಕ ದಯಾಳ್ ಪದ್ಮನಾಭನ್ ಪೂರ್ತಿಗೊಳಿಸಿದ್ದು ಚಿತ್ರದ ಮೊದಲ ಪ್ರತಿಯನ್ನು ಕೂಡ ಹೊರತಂದಿದ್ದಾರೆ.
ದಯಾಳ್ ಪಿಕ್ಚರ್ಸ್ ಅವರ ’ಯೋಗರಾಜ’ ನಿರ್ದೇಶಕ ದಯಾಳ್ ಪದ್ಮನಾಭನ್ ಅವರ ಕಥಾವಸ್ತುವಿಗೆ ಸಂಪೂರ್ಣ ನ್ಯಾಯ ದೊರಕಿದೆ ಎಂದು ತಿಳಿಸಿದ್ದಾರೆ. ಈ ಚಿತ್ರಕ್ಕೆ ಚಕ್ರಪಾಣಿಯವರ ಸಹಾಯವಿದ್ದು ಇಡೀ ಚಿತ್ರದ ಮಾತಿನ ಭಾಗವು ಬೆಂಗಳೂರಿನಲ್ಲೇ ಮಾಡಲಾಗಿದೆ.
ನವೀನ್ ಕೃಷ್ಣ ಹಾಗೂ ನೀತೂ ಅಭಿನಯದ ಈ ಚಿತ್ರದ ಕಥಾ ವಸ್ತು ನಿಜ ಜೀವನದಲ್ಲಿ ಕಂಡ ವ್ಯಕ್ತಿಗಳ ಮೇಲೆ ಆಧಾರವಾಗಿಟ್ಟುಕೊಂಡು ಮಾಡಲಾಗಿದೆ. ಅವಧೂತನ ಪಾತ್ರದಲ್ಲಿ ಹಿರಿಯ ನಟ ಶ್ರೀನಿವಾಸ ಮೂರ್ತಿ ಅಭಿನಯಿಸಿದ್ದಾರೆ. ತರುಣ್ ಸುಧೀರ್, ಎ.ಆರ್.ಬಾಬು, ಅಜಿತ್, ಪವನ್ ಕುಮಾರ್, ಸಿಹಿಕಹಿ ಚಂದ್ರು ಹಾಗೂ ಗೀತ, ಕುರಿ ಪ್ರತಾಪ್ ತಾರಾಗಣದಲ್ಲಿದ್ದಾರೆ. ಈ ಚಿತ್ರಕ್ಕೆ ರಾಕೇಶ್ ಬಿ. ಅವರ ಛಾಯಾಗ್ರಹಣ, ಮಿಲಿಂದ್ ಧರ್ಮಸೇನ ಅವರ ಸಂಗೀತ ಇದೆ.